ಡಿಜಿಟಲ್ ಹೆಜ್ಜೆಗಳು
--

ಭೌತಿಕ ಹೆಜ್ಜೆಗಳು
--

ಯಾತ್ರೆಯ ಚಿತ್ರಾವಳಿ
ನಮ್ಮ ಬಗ್ಗೆ
ಭಾರತ ಐಕ್ಯತಾ ಯಾತ್ರೆ ವೆಬ್ಸೈಟ್ ಮೂಲಕ ಕರ್ನಾಟಕದಲ್ಲಿ ಯಾತ್ರೆ ಯಾವ ಸ್ಥಳದಲ್ಲಿ ಸಾಗುತ್ತಿದೆ, ಎಷ್ಟು ಕಿ.ಮೀ ವರೆಗೆ ಸಾಗಿದೆ, ಎಷ್ಟು ಮಂದಿ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ. ಇದರ ಜೊತೆಗೆ ಆ ದಿನದ ಕಾರ್ಯಗಳು ಏನೇನು ಇರಲಿವೆ ಎಂಬುದನ್ನು ಕೂಡ ವೆಬ್ಸೈಟ್ನಲ್ಲಿ ಕಾಣಬಹುದಾಗಿದೆ.
ಭಾರತ ಐಕ್ಯತಾ ಯಾತ್ರೆಯಲ್ಲಿ ಏಕೆ ಭಾಗಿಯಾಗಬೇಕೆಂಬುದಕ್ಕೆ 5 ಕಾರಣಗಳು 30ನೇ ಸೆಪ್ಟೆಂಬರ್ ನಿಂದ 23ನೇ ಅಕ್ಟೊಬರ್
ನಮ್ಮ ಯುವಜನತೆಯ ಉದ್ಯೋಗಾವಕಾಶಕ್ಕಾಗಿ ಧ್ವನಿಗೂಡಿಸಲು
ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿ ಜನ ಸಾಮಾನ್ಯರು ನೆಮ್ಮದಿಯಿಂದ ಬದುಕುವಂತೆ ಮಾಡಲು.
ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಲು, ದೇಶದಲ್ಲಿ ಸಾಮರಸ್ಯ ಕಾಪಾಡಲು.
ರಾಜ್ಯವನ್ನು ಭ್ರಷ್ಟಾಚಾರದ ಕಳಂಕದಿಂದ ಮುಕ್ತವಾಗಿಸಲು.
ದೇಶದ ಜನರ ಹಸಿವು ನೀಗಿಸುವ ನಮ್ಮ ಅನ್ನದಾತರ ಬದುಕನ್ನು ಭದ್ರಪಡಿಸಲು.
ಸಂಭಾವ್ಯ ಪ್ರಶ್ನೆಗಳು
ಹೌದು, ನೀವು ಯಾವುದೇ ಸಮಯದಲ್ಲಿ, ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಯಾತ್ರೆಯಲ್ಲಿ ಹೆಜ್ಜೆ ಹಾಕಬಹುದು.
ನೀವು ಯಾತ್ರೆಯಲ್ಲಿ ಎಷ್ಟು ಹೆಜ್ಜೆ ಹಾಕಿದ್ದಾರೆಂದು ವೆಬ್ಸೈಟ್ ಲೆಕ್ಕ ಮಾಡುತ್ತದೆ. ಎಷ್ಟು ಕಿ.ಮೀ ವರೆಗೆ ನೀವು ನಡೆದಿದ್ದೀರಾ ಎಂದು ವೆಬ್ಸೈಟ್ನಲ್ಲಿ ನಮೂದಿಸಿದರೆ ನಿಮ್ಮ ಹೆಜ್ಜೆಗಳನ್ನು ನಿಖರವಾಗಿ ತಿಳಿಯಬಹುದು. ಹಾಗೆಯೇ ಅದನ್ನು ನೀವು ನಿಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಬುದು. ಇದು ನಿಮ್ಮ ಆಯ್ಕೆಯಾಗಿದೆ.
ಹೌದು, ಯಾತ್ರೆ ಸ್ಥಳದಲ್ಲಿಯೇ ಆಹಾರ ವ್ಯವಸ್ಥೆ ಇದೆ.
ವೆಬ್ಸೈಟ್ನಲ್ಲಿ ರಿಜಿಸ್ಟರ್ ಆಗಿದ್ದರೆ, ಮೆಸೇಜ್ ಮೂಲಕ ನಿಮಗೆ ಅಪ್ಡೇಟ್ ಕಳುಹಿಸಲಾಗುವುದು. ವಸತಿಗಾಗಿ ಈಗಾಗಲೇ ವಿವಿಧ ಸ್ಥಳಗಳನ್ನು ಗುರುತಿಸಲಾಗಿದೆ. ಯಾತ್ರೆಯ ಸಮಯದಲ್ಲಿ ಆ ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನಿಮಗೆ ಸಿಕ್ಕಿರುವ ಸ್ಥಳಗಳಲ್ಲಿ ಯಾವ ಸ್ಥಳ ಬೇಕೆಂದು ನೀವು ಆರಿಸಿ ಆಯ್ಕೆ ಮಾಡಿಕೊಳ್ಳುತ್ತಿರೋ ಆ ಸ್ಥಳದಲ್ಲಿಯೇ ನಿಮಗೆ ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು.
ಹೌದು, ಯಾತ್ರೆಯಲ್ಲಿ ಎಷ್ಟು ಮಂದಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕಲು ನೋಂದಣಿ ಮಾಡಿಕೊಳ್ಳುವುದು ಅಗತ್ಯವಾಗಿದೆ. ಜೊತೆಗೆ ಯಾತ್ರೆಯಲ್ಲಿ ಭಾಗಿಯಾಗಿರುವವರಿಗೆ ಇನ್ನುಳಿದ ವ್ಯವಸ್ಥೆ ಮಾಡಲು ಸಹಕಾರಿಯಾಗುತ್ತದೆ. ಹಾಗಂಥ ಇದೇನು ಕಡ್ಡಾಯವಲ್ಲ, ನೋಂದಣಿ ಮಾಡಿಕೊಳ್ಳದೆಯೇ ನಿಮ್ಮ ಕುಟುಂಬಸ್ಥರನ್ನು ಹಾಗೂ ಸ್ನೇಹಿತರನ್ನು ಕರೆದುಕೊಂಡು ಬರಬಹುದು.
ಯಾತ್ರೆಯ ಪ್ರಮುಖ 5 ಕಾರಣಗಳಲ್ಲಿ ಯಾವುದನ್ನಾದರೂ ಬೆಂಬಲಿಸಲು ಬಯಸುವ ರಾಜ್ಯದ ಜನತೆ ಯಾತ್ರೆಯಲ್ಲಿ ಹೆಜ್ಜೆ ಹಾಕಬಹುದಾಗಿದೆ. ಇವರ ಜೊತೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಮುಖ ನಾಯಕರು ಹಾಗೂ ಶ್ರೀ ರಾಹುಲ್ ಗಾಂಧಿ ಮತ್ತು ತಂಡದ ಸದಸ್ಯರು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಸೆಪ್ಟೆಂಬರ್ 30 ರಂದು ಚಾಮರಾಜನಗರದಲ್ಲಿ ಯಾತ್ರೆ ಆರಂಭವಾಗುತ್ತದೆ. ಅಕ್ಟೋಬರ್ 20 ರವರೆಗೆ ರಾಜ್ಯದಲ್ಲಿ ಯಾತ್ರೆ ಸಾಗಲಿದೆ.
ಹೌದು, ಯಾತ್ರೆಯ ನಡುವೆ ಕೆಲವು ದಿನ ವಿರಾಮ ನೀಡಲಾಗುತ್ತದೆ. ಅದರ ವಿವರಗಳನ್ನು ವೆಬ್ಸೈಟ್ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಮುಖ್ಯವಾಗಿ ದಸರಾ ಹಬ್ಬದ ಅಂಗವಾಗಿ ಅಕ್ಟೋಬರ್ 4 ಮತ್ತು 5 ರಂದು ಯಾತ್ರೆಗೆ ವಿರಾಮ ನೀಡಲಾಗಿದೆ.
ಹೌದು, ಶ್ರೀ ರಾಹುಲ್ ಗಾಂಧಿ ಅವರನ್ನು ನೀವು ಭೇಟಿ ಮಾಡಬಹುದು. ಜನರನ್ನು ಭೇಟಿ ಮಾಡಿ ಅವರ ಜೊತೆ ಮಾತನಾಡಲೆಂದೇ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.